ನವಿಲಿಗೆ ಗರಿಗಳಿವೆ, ಅದು ಜಾಗರವಾಡಿದಾಗ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ನವಿಲನ್ನು ನೋಡಿ ಕೆಂಬೂತ ತಾನೂ ಅದರಂತೆ ಚೆನ್ನಾಗಿ ಕಾಣಬೇಕೆಂದು ಪುಕ್ಕವಾನು ತರಿದು ಕೊಂಡರೆ ಇದ್ದ ಪುಕ್ಕವೂ ಉದುರಿಹೋಗಿ ಮೊದಲಿಗಿಂತ ಅಧ್ವಾನವಾಗಿ ಕಾಣುತ್ತದೆ. ಅದರಂತೆಯೆ ಯಾರೋ ಏನೋ ಮಾಡಿದರು ಎಂದು ತನ್ನ ಯೋಗ್ಯತೆಗೆ ನಿಲುಕದ, ತನ್ನ ಅಳವಿಗೆ ಬರದ ಕೆಲಸವನ್ನು ಮಾಡಬಾರದು ಎಂದಬುದೇ ಇದರ ಸಾರ.