"ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ."
ಎಲ್ಲಾ ದುರಂತಗಳಿಗೂ ಕಾರಣ ಒಂದು ನಮ್ಮ ಮನಸ್ಸು,ಇನ್ನೊಂದು ಆಕಸ್ಮಿಕ. ನಾವು ಸದಾಕಾಲ ಸಕಾರಾತ್ಮಕವಾಗಿ ವಿಚಾರ ಮಾಡುತ್ತ ದಿನಗಳೆದರೆ, ನಮ್ಮ ಸ್ಥಿತ ಪ್ರಜ್ಞೆಯಲ್ಲಿ ನಾವಿದ್ದರೆ, ನಮ್ಮ ಇಂದ್ರಿಯಗಳ ಮೇಲೆ ನಿಗಾ ಇರುವುದೇಯಾದರೆ ನಾವು ಎಲ್ಲಾ ಘಟನೆ,ಸಂಧರ್ಭಗಳನ್ನು ಆತ್ಮವಲೋಕನ ಮಾಡುತ್ತ ಮನೋಲ್ಲಾಸದಿಂದಿರಬಹುದು.
ಮನುಷ್ಯನಿಗೆ ಜೀವನದಲ್ಲಿ "
ಕಳೆದುಕೊಂಡ ಪ್ರೀತಿ,
ಹಸಿದ ಹೊಟ್ಟೆ,
ಖಾಲಿ ಜೇಬು. ಈ ಮೂರು ಅತ್ಯುತ್ತಮವಾದಂತಹ ಪಾಠವನ್ನ ಕಲಿಸುತ್ತವೆ.
ನಾವು ಇಷ್ಟ ಪಡೋರು ನಮ್ಮನ್ನು ಇಷ್ಟ ಪಡಲ್ಲ.
ನಮ್ಮನ್ನು ಇಷ್ಟ ಪಡೋರ್ನ ನಾವು ಇಷ್ಟ ಪಡಲ್ಲ ,ಒಂದು ವೇಳೆ ನಮಗಿಬ್ಬರಿಗೂ ಇಷ್ಟ ಆದರೆ, ಆ ದೇವರಿಗೆ ಇಷ್ಟ ಆಗಲ್ಲ.ಹೀಗೊಂದು ಮಾತೂ ಇದೆ.ಆದರೆ ಮೊದಲೆರಡು ಸಾಲುಗಳು ನಿಜವಾಗಿವೆ ಆದರೆ ಮೂರನೆಯದು ಮಾತ್ರ ಅನುಭವ ಆಗಿಲ್ಲ.
ಕೊನೆಗೂ, " ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ .
* ನಾವು ಬಯಸಿದ್ದು ನಮಗೆ ಸಿಗಲಿಲ್ಲವೆಂದಾದರೆ, ಅದರ ಅವಶ್ಯಕತೆ ನಮಗಿಲ್ಲವೆಂದು ತಿಳಿಯಬೇಕು. ಅದರಿಂದ ಹೆಚ್ಚು ಶೋಕ ಪಡುವುದನ್ನು ತಡೆದಂತಾಗುವುದು.