Snap Deal Search

ಅದೇ ರಾಗ ಅದೇ ತಾಳ

         ಅದೇ ರಾಗ ಅದೇ ತಾಳ

              ಕಾಲೇಜು ಹೋಗುವ ಮೊದಲೆ ಪ್ರತಿಯೊಬ್ಬ ವಿದ್ಯಾರ್ಥಿಯು ಇನ್ನು ಮುಂದೆಯಾದರೂ ಚೆನ್ನಾಗಿ ಓದೋಣ ಎಂದು ನಿರ್ಧಾರ ಮಾಡಿರುತ್ತಾರೆ. ಇಲ್ಲಿಯವರೆಗೆ ಮಾಡಿರುವ ಎಲ್ಲಾ ಚೇಷ್ಟೆಗಳನ್ನು ಕಡಿಮೆ ಮಾಡಿ ಪ್ರೀತಿ ಪ್ರೇಮ ಅನ್ನೋ ಬಲೆಯೊಳಗೆ ಬೀಳಬಾರದೆಂದು ಯೋಚನೆ ಮಾಡಿರುತ್ತಾರೆ.

                     ಹಾಗೆಯೇ, ಉತ್ತಮ ಅಂಕಗಳನ್ನು ಪಡೆಯಬೇಕೆಂಬ ನಿರೀಕ್ಷೆಯು ಇನ್ನೊಂದು ಕಡೆ. ಕಾಲೇಜು ಆರಂಭದ ಕೆಲವು ದಿನಗಳಲ್ಲಿ ಎಷ್ಟು ನಯ-ವಿನಯ , ನಾಚಿಕೆ , ಶಿಸ್ತು , ಬುದ್ಧಿವಂತಿಕೆ ಪ್ರದರ್ಶನ , ಒಣ ಆಡಂಬರದ ಮಾತುಗಳು , ಹಾಸ್ಯ ಪ್ರಸಂಗ , ಮೊಬೈಲ್ ಬಳಕೆ , ನಾನೆಂಬ ಅಹಂ , ನಾಯಕತ್ವ ವಹಿಸಿಕೊಳ್ಳಲು ಶಿಕ್ಷಕರ  ಹಾಗೂ ಸಹಪಾಠಿಗಳ ಜೊತೆ ಆತ್ಮೀಯ ಸಂಬಂಧ, ಕಡಿಮೆ ಮಾತು , ಹುಡುಗಿಯರ ಎದುರಿಗೆ ಸಭ್ಯರಂತೆ ವರ್ತಿಸುವುದು , ಯಾರನ್ನೂ ನೋಡಿಯು ನೋಡದ ಹಾಗೆ ನಟಿಸುವುದು , ಆಹಾ! ಮುಖದಲ್ಲಿ ಮಂದಹಾಸ ; ಎದೆಯಲ್ಲಿ ತಳಮಳ , ಯಾರೂ ನೋಡದೆ ಇದ್ದರೂ ಎಲ್ಲರೂ ನನ್ನೇ ನೋಡುತ್ತಿದ್ದಾರೆ ಎಂಬ ಭ್ರಮೆ.

                   ಹೇಗೇಗೋ ಸುಧಾರಿಸು ಕುಳಿತುಕೊಳ್ಳಲು ಹೋಗಿ ಎಡವಿ ನಾಚಿಕೆಗೀಡು ಮಾಡುವ ಸಂಧರ್ಭದಲ್ಲಿ ಎಲ್ಲರನ್ನೂ ನೋಡಿ ಅಬ್ಬ! ಯಾರೂ ನೋಡುತ್ತಿಲ್ಲವೆಂದು ತಿಳಿದು ಎಡವಿದರಲ್ಲೇ ಮತ್ತೊಂದು ಶೈಲಿಯಲ್ಲಿ ಏಳುವುದು. ಅದೇ ತರಗತಿಯ ಕೋಣೆಯಲ್ಲಿ ಪಾಠ ಮಾಡುವಾಗ ಸರಿಯಾಗಿ ಕೇಳಿ , ಹೇಳಿ ತಿಳಿದುಕೊಂಡರೂ ಕಿರು-ಪರೀಕ್ಷೆ/ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವುದು; ಇಲ್ಲವಾದರೆ ಅನುತ್ತೀರ್ಣ ಆಗುವ ಸಂಭವವು ಹೆಚ್ಚು.

      ಆದರೆ, ಯಾಕೆ  ಹೀಗಾವುದುಎಂದು ಪ್ರಶ್ನೆ ಮಾಡಿದರೆ ಕೆಲವೊಂದು ಅಂಶಗಳು ಗೋಚರವಾಗುತ್ತವೆ ಅವುಗಳು :
1} ಕಾಲೇಜು ಅರಂಭದಿಂದ ಚೆನ್ನಾಗಿ ಓದಬೇಕೆಂದುಕೊಂಡಿರುತ್ತಾರೆಯೇ ಹೊರತು ಕಾರ್ಯ ರೂಪಕ್ಕೆ ತರುವುದಿಲ್ಲ.

2} ಆರಂಭದಿಂದಲೇ ಕ್ರಮವಾಗಿ ಪ್ರತಿ ದಿನವೂ ಓದುವುದಿಲ್ಲ.

3} ಹೆಚ್ಚು ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗುವುದಿಲ್ಲ.

4} ಮೊಬೈಲ್ ಬಳಕೆಯಲ್ಲಿಯೇ ಅತೀ ಹೆಚ್ಚು ಕಾಲ ಕಳೆಯುತ್ತಾರೆ.

5} ದುಶ್ಚಟಗಳಿಗೆ ಹೊಂದಿಕೊಂಡು ಗೆಳೆಯರ ಜೊತೆ ಸುಮ್ಮನೆ ಕಾಲ ಹರಣ ಮಾಡುತ್ತಾರೆ.

6} ಅತಿಯಾಗಿ ಟಿ.ವಿ ನೋಡುವುದು , ಹಾಡು ಕೇಳುವುದು , ಮಲಗುವುದರಿಂದ.

7} ಸಮಯದ ಮಹತ್ವ ತಿಳಿಯದೆ ಇರುವುದರಿಂದ .

8} ಜೀವನದ ಮೌಲ್ಯಗಳ ಬಗ್ಗೆ ಅರಿವಿಲ್ಲದಿರುವುದರಿಂದ.

9} ಎಲ್ಲವನ್ನೂ ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ.

10} ನಾಳೆ ಮಾಡೋಣ ಎನ್ನುವ ಆಲಸ್ಯತನದಿಂದ.


NEE MEETIDA

Movie: Nee Bareda Kaadambari (1985)
Music: Vijay Anand
Lyrics: R N Jayagopal
Singer: S Janaki
Direction: Dwarakish

Nee Meetida Nenapellavu Ede Tumbi Haadaagide…

Nee Meetida Nenapellavu Ede Tumbi Haadaagide..
Indetako Naa Ninnanu Berevantha Manasaagide..
Ee Bandhana Bahu Janmada Kathe Endu Mana Helide..
Ee Bandhana Bahu Janmada Kathe Endu Mana Helide..
Ammaa.. Ammaaa.. Ammaaa.. Ammaaa.. Ammaaa.. Ammaaa..

Neenomme Nannannu Olavinda Maathaadisu..
Baa Kanda Endenna Muddadi Aalangisu..
Maguvaaguve Ninna Madilalli Naa..
Kunidaaduve Ninna Jotheyalli Naa..
Naa Kaanalu Ninnee Mukha..
Naa Kaanada Eno Sukha..
Ammaa.. Ninna Magana Kariye Balige..

Nee Meetida Nenapellavu Ede Tumbi Haadaagide…

Indeko Naa Ninna Nenapinda Mareyaadaru..
Nee Nanna Manadalli Endendu Nagutha Iru..
Nee Nakkare Ade Sihi Sakkare..
Naa Noyuve Amma.. Nee Nondare..
Kanneeridu Koneyaagali.. Aanandavu Ninadaagali..
Ammaa.. Ninna Magana Kariye Balige..

Nee Meetida Nenapellavu Ede Tumbi Haadaagide..
Indetako Naa Ninnanu Berevantha Manasaagide..
Ee Bandhana Bahu Janmada Kathe Endu Mana Helide..
Ee Bandhana Bahu Janmada Kathe Endu Mana Helide..

Ammaa.. Ammaaa.. Ammaaa.. Ammaaa.. Ammaaa.. Ammaaa..

ಸಾಲ

ಸಾಲ
  
           ಮಾಡಿಕೊಂಡೆನಪ್ಪ ಸಾಲವನ್ನು , ತೀರಿಸಲಸಾಧ್ಯವಾಗಿದೆ ಇಂದು !
ತಿಳಿದು, ತಿಳಿಯದೋ ಮಾಡಿಕೊಂಡೆ ಸಾಲವೆಂಬ ಮದುವೆಯನ್ನು!

ತಿಂಗಳಿಗೊಮ್ಮೆ ಜನ್ಮ ಕೊಡುತ್ತಿರುವೆ ಬಡ್ಡಿಯೆಂಬ ಮಕ್ಕಳನ್ನು!
ಹೇಗಯ್ಯ ನಡೆಸಲಿ ಈ ಸಾಲವೆಂಬ ಸಂಸಾರವನ್ನು !

ಇದರಂತ್ಯ ಎಂದಿದಿಯೋ ತಿಳಿಯದಾಗಿದೆ ಒಂದೂ!
ಇನ್ನೆಷ್ಟು ಸಂಕಟವ ಪಡಬೇಕಯ್ಯ ಮುಂದು!

ಒಬ್ಬರ ನಂತರ ಒಬ್ಬರು ಬರುತಿಹರಯ್ಯ ಮನೆಗೆ ಸಾಲ ಕೊಟ್ಟವರು !
ಅವರಿಗೆಷ್ಟು ಸಮಾಧಾನ ಮಾಡಲಿ ನಾನು!
ಕೇಳುವವರಿಲ್ಲ ಯಾರೂ ನನ್ನ ಗೋಳು!

ಅಜ್ಞಾನದಿಂದ ಮಾಡಿರುವ ಈ ಸಾಲವು ಮೊದಮೊದಲು ಹಿತಕೊಟ್ಟು, ಹಿಂಡುತಿದೆ ಇಂದು ಪ್ರಾಣವನ್ನು!
ಇದರಿಂದ ಪಾರಗಲು ಇಹುದೇನಾದರು ದಾರಿಯ?

ದುಡಿಯುತ್ತಿರುವೆ ಸಾಲವ ತೀರಿಸಲು!
ಆದರೂ, ತಡೆದುಕೊಳ್ಳಲಾಗುತ್ತಿಲ್ಲ ಈ ಸಾಲದ ಭಾದೆ!
ಕಾಣದಂತಾಯಿತು ಸಂತೋಷವ ಈ ಬದುಕಿನೊಳಗೆ !

ಚಿಂತೆ ಹೆಚ್ಚಾಯಿತು, ಮನಸ್ಸು ಕಂಗಾಲಾಯಿತು!
ಎದೆ ಬಡಿತ ಹೆಚ್ಚುತ್ತ ದುಗುಡ ಉದ್ಭವಿಸಿತು!

ಊಟಮಾಡಲಾಗುತ್ತಿಲ್ಲ, ಎದ್ದೇಳಲಾಗುತ್ತಿಲ್ಲ!
ಕಾಲು ಮುರಿದ ಕೋಳಿಯಂತೆ ಬಿದ್ದಿರುವೆ ಮೂಲೆಯಲ್ಲಿ !
ಆದೆ ನಾನು ನಿಶ್ಯಕ್ತನಾದೆ! ಆದೆ ನಾನು ನಿಶ್ಯಕ್ತನಾದೆ!!!

ಸಂಕಟ ಬಂದಾಗ ವೆಂಕಟರಮಣ, ಮೆಚ್ಚುವನೇ ದೇವರು ಇದನ!
ಛೆ! ಛೆ! ಬರುಡು ಭೂಮಿಯಂತಾದೆ ಬಾಳಿನೊಳು!

ಯಾರೂಯಿಲ್ಲ ಸಹಾಯಕ್ಕೆಂದು , ಮಾಡಿದ್ದುಣ್ಣೋ ಮಾರಾಯ! ಎಂಬುದರಿವಾಗಿದೆ ಇಂದು , ಮುದುಕನಿಗಿರುವ ಕೋಲಾಸರೆಯು ಎನಗಿಲ್ಲ ಇಂದು !

ಹೆಂಡತಿ ದೂರಾದಾಗ ಆಗಲಿಲ್ಲ ಈ ನೋವು !
ಮಕ್ಕಳು ದೂರಿದಾಗ ಆಗಲಿಲ್ಲ ಈ ಸಂಟ !
ಅವಮಾನವಾದಾಗ ಆಗಲಿಲ್ಲ ಈ ಪರಿಯ ಭಾದೆ !

ಬದುಕಿ ಸತ್ತಂತೆ ಇರುವುದಕ್ಕಿಂತ ,
ಕೊನೆಯುಸಿರೆಳೆಯುವುದೇ ಲೇಸು ಎಂದೆನಿಸುತ್ತಿದೆ!
ಆದರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ
ಎಂದು ತಿಳಿದಿತ್ತು ಎಂದೋ!

ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಾಗುತಿದೆ ಬಾಳು!

ಮರುಜನ್ಮ ಬೇಡವೆನ್ನುವುದೇಕೆ?

ಎಚ್ಚೆತ್ತುಕೊಂಡು ನೋಡಿದರೆ, ಜೀವನದಲ್ಲಿ ಬಹಳ ದುಃಖವನ್ನು ಕಾಣಬಹುದು. ಜೀವನದಲ್ಲಿ ದುಃಖವಿದೆ ಮತ್ತು ದುಃಖವೆಂದರೆ ನಿಮಗೆ ಇಷ್ಟವಾಗದೆ ಇರುವುದು, ಬೇಡದೆ ಇರುವುದು. ನಾವು ಯಾವುದನ್ನು ಹೊಂದಲು ಬಯಸುವುದಿಲ್ಲವೊ, ಅದೇ ದುಃಖ ಮತ್ತು ಅದು ಇದೆ. ಪತಿ-ಪತ್ನಿಯ ನಡುವೆ, ತಂದೆ-ಮಗಳ ನಡುವೆ, ತಾಯಿ- ಮಗನ ನಡುವೆ, ಸಹೋದರ-ಸಹೋದರಿಯರ ನಡುವೆ, ಸ್ನೇಹಿತರ ನಡುವೆ ದುಃಖವಿದೆ. ಶತ್ರುಗಳಿಂದ ದುಃಖವಿದೆ. ನೀವೇನೇ ಮಾಡಿದರೂ ದುಃಖವಿರುತ್ತದೆ. ನಿಮ್ಮ ದೇಹ ಎಲ್ಲದಕ್ಕಿಂತಲೂ ಹೆಚ್ಚು ದುಃಖವನ್ನು ಕೊಡುತ್ತದೆ. ಜಗತ್ತಿನಲ್ಲಿ ಜನಿಸಿ ದಾಗ ಮಗುವಾಗಿ ಇತರರ ಮೇಲೆ ಅವಲಂಬಿಗಳಾಗಿ ದ್ದಿರಿ. ನಿಮ್ಮಿಂದ ಏಳಲೂ ಆಗುತ್ತಿರ ಲಿಲ್ಲ. ನಿಮ್ಮನ್ನು ಯಾರೋ ಮೇಲಕ್ಕೆತ್ತಬೇಕಾ ಯಿತು. ಯಾರೋ ನಿಮ್ಮನ್ನು ಒರೆಸಬೇಕಾಯಿತು. ಹುಟ್ಟಿದ ಕ್ಷಣದಿಂದ ನೀವು ಅವಲಂಬಿಗಳು. ವಯಸ್ಸಾದ ಮೇಲೂ ಅವಲಂಬಿಗಳಾಗು ತ್ತೀರಿ. ಆದರೆ ಹಣದಿಂದ ನೀವು ಸ್ವತಂತ್ರರು ಎಂಬ ತಪ್ಪಾದ ಅಭಿಪ್ರಾಯ ಬರು ತ್ತದೆ. ಆದ್ದರಿಂದಲೇ ಅದನ್ನು ಮಾಯೆ ಎಂದು ಕರೆಯು ವುದು. ಮಾಯೆ ಎಂದರೆ, ಇತರರಿಗೆ ಕೆಲವು ರೂಪಾಯಿ ಗಳನ್ನು ನೀವು ಕೊಟ್ಟಾಗ, ನೀವು ಸ್ವತಂತ್ರರಾಗಿರುವಿರಿ ಎಂಬ ಭಾವನೆಯನ್ನು ಹೊಂದುವುದು. ಜೀವನದಲ್ಲಿ ಅವಲಂಬನೆ ಇದೆ. ಅವಲಂಬನೆ ಇದ್ದಾಗ ದುಃಖವಿರುತ್ತದೆ. ಯಾವುದು ದುಃಖವೊ ಅದರಿಂದ ನಿಮಗೆ ಹಿತವುಂಟಾಗುವುದಿಲ್ಲ. ಆದ್ದರಿಂದ ಅದನ್ನು ಹೊಂದಲು ನೀವು ಬಯಸುವುದಿಲ್ಲ. ಆದ್ದರಿಂದ ಜನರು ಇನ್ನು ಮುಂದೆ ಮರುಜನ್ಮ ಬೇಡ ಎಂದರು. ಎಲ್ಲವೂ ಸಾಕುಸಾಕಾಗಿದೆ ಎಂದರು. 

ಸ್ವಲ್ಪ ಊಹಿಸಿ. ಮತ್ತೊಮ್ಮೆ ಶಾಲೆಗೆ ಹೋಗಬೇಕು, ಎರಡೇಟನ್ನು ತಿನ್ನಬೇಕು. ನಂತರ ಕಾಲೇಜಿಗೆ ಹೋಗಿ, ಹದಿಹರೆಯದ ಸಮಸ್ಯೆಗಳನ್ನೆಲ್ಲಾ ಎದುರಿಸಬೇಕು. ಹದಿಹರೆಯದವರ ಮುಖಗಳನ್ನು ನೋಡಿದರೆ ಅವು ಊದಿಕೊಂಡಿರುತ್ತವೆ, ಬಹಳ ಕೋಪದಿಂದ ಇರುತ್ತಾರೆ. ಹೆತ್ತವರ ಮೇಲೆ ಕೋಪ. ಏನು ಮಾಡಬೇಕೆಂದೇ ಅವರಿಗೆ ತಿಳಿದಿರುವುದಿಲ್ಲ. ನಮ್ಮನ್ನು ಕಾಡುವವರು ಕೇವಲ ಶತ್ರುಗಳಲ್ಲ; ನಮ್ಮನ್ನು ಹೆಚ್ಚಾಗಿ ಕಾಡುವವರೆಂದರೆ ನಮ್ಮ ಮಿತ್ರರು. ಎಲ್ಲವೂ ಒಂದು ಸಮಸ್ಯೆಯೆ. ಶತ್ರುಗಳು ನಿಮ್ಮ ಮನಸ್ಸನ್ನು ಹೇಗೆ ಆವರಿಸಿಕೊಂಡಿರುತ್ತಾರೋ, ಹಾಗೆಯೇ ಮಿತ್ರರೂ ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಇವೆಲ್ಲಾ ಸಮಸ್ಯೆಗಳು ಒಂದೆಡೆಯಾದರೆ, ನಿಮಗೆ ಮತ್ತೊಂದು ಕಡೆ ಸಮಸ್ಯೆಯನ್ನು ಉಂಟುಮಾಡುವ ವಿಷಯವೆಂದರೆ ನಿಮ್ಮದೇ ಮನಸ್ಸು. ನಿಮ್ಮ ಮನಸ್ಸು ನಿಮ್ಮನ್ನು ಕಾಡುವಷ್ಟು ಈ ಜಗತ್ತಿನ ಬೇರೆ ಯಾವುದೂ ನಿಮ್ಮನ್ನು ಕಾಡಲಾ ರದು. ಇತರರು ನಿಮ್ಮನ್ನು ಕಾಡುತ್ತಿರುವಂತೆ ತೋರುತ್ತದೆಯಾದರೂ ವಾಸ್ತವದಲ್ಲಿ ನಿಮ್ಮನ್ನು ಕಾಡುತ್ತಿರುವುದು ನಿಮ್ಮದೇ ಮನಸ್ಸು. ಆದ್ದರಿಂದ ನಿಮ್ಮ ಮನಸ್ಸಿನಿಂದ ಮುಕ್ತಿ ಯನ್ನು ಬಯಸುತ್ತೀರಿ. ಆಗ, ''ಇನ್ನೊಂದು ಜನ್ಮ ಬೇಡಪ್ಪ!,'' ಎನ್ನುತ್ತೀರಿ. ಆದರೆ ಕಾಡುತ್ತಿರು ವುದು ನಿಮ್ಮದೇ ಮನಸ್ಸು ಎಂದು ಕಂಡುಕೊಂಡಾಗ, ನಿಮ್ಮನ್ನು ಕಾಡುತ್ತಿರು ವುದು ಇತರರಲ್ಲಿ ಎಂದು ಅರಿತುಕೊಂಡಾಗ, ಅದೇ ಜ್ಞಾನ. ಜ್ಞಾನವಿದ್ದಾಗ, ''ಮತ್ತೆ ನೂರು ಸಲ, ಸಾವಿರ ಸಲ ಜನ್ಮ ಪಡೆದು ಬಂದರೂ ಏನಂತೆ?,'' ಎನ್ನುತ್ತೀರಿ. ಜ್ಞಾನ ದಲ್ಲಿದ್ದಾಗ ಜೀವನವೆಂದರೆ ಸಂತೋಷ, ಆನಂದ ಎಂದು ಅರಿತುಕೊಳ್ಳುತ್ತೀರಿ. 

ನಮ್ಮ ಮನಸ್ಸೇ ನಮ್ಮ ಆಪ್ತಮಿತ್ರ, ನಮ್ಮ ಮನಸ್ಸೇ ನಮ್ಮ ಶತ್ರು, ಅತಿ ನಿಕಷ್ಟವಾದ ಶತ್ರು. ಮಿತ್ರನಲ್ಲ ಮನಸ್ಸು ಶತ್ರುವನ್ನು ಕಾಣಬಹುದು ಮತ್ತು ಶತ್ರುವಲ್ಲೂ ಮಿತ್ರನನ್ನು ಕಾಣಬಹುದು. ಮನಸ್ಸು ವಿಷಯಗಳನ್ನು ತಿರುಚಿ, ವಿಕತಗೊಳಿಸಿ ತನ್ನದೇ ನರಕವನ್ನು ಸಷ್ಟಿಸಬಲ್ಲದು. ತನ್ನದೇ ಸ್ವರ್ಗವನ್ನೂ ಸಷ್ಟಿಸಬಲ್ಲದು. ಇಂತಹ ಮನಸ್ಸಿನಿಂದ ಸ್ವಾತಂತ್ರ್ಯವನ್ನು ಬಯಸುತ್ತೇವೆ. ಮರುಜನ್ಮ ಬೇಡ ಎನ್ನುತ್ತೇವೆ. 

ಈ ಜಗತ್ತೆಲ್ಲವೂ ಶಕ್ತಿಮಯ

ಧ್ಯಾನಯೋಗವೆ ಶಾಂತಿಯ ಸುಗಮ ಸಾಧನ. ದೇವನ ಸುಂದರ ರೂಪ, ಲಕ್ಷಣಗಳನ್ನು ಆಧರಿಸಿ ಮಾಡುವುದೆ ವೈಚಾರಿಕ ಧ್ಯಾನವಾಗಿದೆ. ಪರಮೇಶ್ವರನು ಪ್ರಭುವು, ತ್ರಿಲೋಚನನು, ನೀಲಕಂಠನು, ಪ್ರಶಾಂತನು, ಶಕ್ತಿಸಮೇತನೂ ಆಗಿರುತ್ತಾನೆ. ಇಂಥ ಪರಮಾತ್ಮನ ಧ್ಯಾನಮಾಡಿದ ಮುನಿಯು ಜಗತ್‌ಸಾಕ್ಷಿಯು, ಚರಾಚರ ಜನಕನೂ ಆಗಿರುವ ಜಗದೀಶನಲ್ಲಿ ಬೆರೆತು ಒಂದಾಗಿ ಸಮರಸಾನಂದವನ್ನು ಪಡೆಯುತ್ತಾನೆ. ಉಮಾ ಎಂದರೆ ಪಾರ್ವತಿ ಅಥವಾ ಶಕ್ತಿ. ಶಿವನು ಶಕ್ತಿಸಹಿತನಾಗಿದ್ದಾನೆ. ಶಕ್ತಿ ಇಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ನಡೆಯಲು, ನುಡಿಯಲು ಹೇಳಲು ಕೇಳಲು, ನೋಡಲು ಮಾಡಲು ಎಲ್ಲದಕ್ಕೂ ನಮ್ಮ ದೇಹದಲ್ಲಿ ಶಕ್ತಿ ಇರಬೇಕಾಗುತ್ತದೆ. ಅರ್ಧಾಂಗವಾಯು ಕಾಯಿಲೆಯಿಂದ ಬಳಲುವ ಮನುಷ್ಯನು ಯಾವುದೇ ದೈಹಿಕ ಕಾರ್ಯಗಳನ್ನು ಸರಿಯಾಗಿ ಮಾಡಲಾರನು. ಏಕೆಂದರೆ ಅವನ ದೈಹಿಕ ಶಕ್ತಿಯು ಕುಂದಿರುತ್ತದೆ, ಮಳೆ ಆಗುವುದಕ್ಕೆ, ಬೆಳೆ ಬರುವುದಕ್ಕೆ, ಗಾಳಿ ಬೀಸುವುದಕ್ಕೆ, ಸೂರ್ಯೋದಯ, ಚಂದ್ರೋದಯ ಆಗುವುದಕ್ಕೆ ಎಲ್ಲದಕ್ಕೂ ಶಕ್ತಿ ಬೇಕೇಬೇಕು. ಹೀಗೆ ಭೂಮ್ಯಾಕಾಶದಲ್ಲಿ ನಡೆಯುವ ಎಲ್ಲ ಕಾರ್ಯಗಳು ಶಕ್ತಿಯನ್ನೇ ಅವಲಂಬಿಸಿವೆ. ನಾವು ಈ ಭೂಮಿಗೆ ಬಂದಾಗಿನಿಂದ ಕೊನೆಯವರೆಗೆ ನಮ್ಮ ಹೃದಯವು ಒಂದು ಕ್ಷಣವೂ ಬಿಡದೆ ಬಡಿದುಕೊಳ್ಳುತ್ತದೆ. ಒಂದೇ ಒಂದು ಕ್ಷಣ ಶಕ್ತಿಯು ಇಲ್ಲದಾದರೆ ಹೃದಯದ ಬಡಿತ ನಿಂತುಬಿಡುತ್ತದೆ, ಜೀವನ ಯಾತ್ರೆ ಮುಗಿದುಬಿಡುತ್ತದೆ. ಹೃದಯವು ನಮ್ಮ ಮಾತು ಕೇಳುವುದಿಲ್ಲ. ಶಕ್ತಿ ಸಮೇತನಾದ ಶಿವನ ಮಾತು ಕೇಳುತ್ತದೆ. ಆದುದರಿಂದ ಆ ಶಿವನೇ ಪ್ರಭು ಅಥವಾ ಒಡೆಯನು. ಚಿಕ್ಕದಾದ ಸಂಚಾರಿ ದೂರವಾಣಿಯು ನಮ್ಮ ಧ್ವನಿಯನ್ನು ಪ್ರಪಂಚದ ಮೂಲೆ ಮೂಲೆಗೆ ಒಯ್ದು ತಲುಪಿಸುತ್ತದೆ. ನಮ್ಮ ಎದುರಿಗೆ ಕುಳಿತವರಿಗೆ ಒಮ್ಮೊಮ್ಮೆ ನಮ್ಮ ಮಾತು ಕೇಳುವುದಿಲ್ಲ. ಆದರೆ ಸಾವಿರ ಸಾವಿರ ಮೈಲುಗಳಾಚೆ ಇರುವ ನಿರ್ದಿಷ್ಟ ವ್ಯಕ್ತಿಗೆ ನಮ್ಮ ಮಾತು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಈ ಸಂಚಾರಿ ದೂರವಾಣಿಯ ಕಾರ್ಯ ಸಣ್ಣದೇನಲ್ಲ. ಅದಕ್ಕೂ ಒಂದು ಶಕ್ತಿ ಬೇಕೇ ಬೇಕು. 'ಶಕ್ತಿಮಯಂ ಏತತ್ ಜಗತ್!' ಹೀಗೆ ಈ ಜಗತ್ತೆಲ್ಲವೂ ಶಕ್ತಿಮಯವಾಗಿದೆ. ಈ ರೀತಿ ಜಗತ್ತಿನಲ್ಲಿರುವ ಭೌತಿಕ, ಅಭೌತಿಕ ಎಲ್ಲ ಶಕ್ತಿಗೆ ಮೂಲವಾದ ವಿಶ್ವಶಕ್ತಿ ಅಥವಾ ವಿಶ್ವಾತ್ಮಶಕ್ತಿಯೇ ಪರಶಿವ ಪರಮಾತ್ಮ. ಹೀಗೆ ಯಾವುದೋ ಒಂದು ಕಣ್ಣಿಗೆ ಕಾಣದ, ಕೈಗೆ ಸಿಗದ, ಬುದ್ಧಿಗೆ ಎಟುಕದ ಶಕ್ತಿಯೆ ಈ ಪ್ರಪಂಚದ ಎಲ್ಲ ಕಾರ್ಯಗಳಿಗೆ ಕಾರಣವಾಗಿದೆ. ಮಳೆ, ಬೆಳೆ, ಗಾಳಿ ಬೆಳಕು ಸಮಸ್ತ ಪ್ರಪಂಚವೇ ಆ ಶಕ್ತಿಯ ನಿಯಂತ್ರಣದಲ್ಲಿದೆ. ಅದು ಪರಶಿವ ಪರಮಾತ್ಮಶಕ್ತಿ, ಅದುವೇ ಈ ಜಗತ್ತಿಗೆ ಪ್ರಭು ಅಥವಾ ಒಡೆಯ. ಆ ಪರಶಿವನ ಆಜ್ಞೆಯಂತೆ ಈ ಜಗತ್ತು ನಡೆಯುತ್ತದೆ ವಿನಾ ನಮ್ಮ ಆಜ್ಞೆಯಂತಲ್ಲ. ನಮ್ಮ ಕೈ ಕಾಲು, ಮನ, ಬುಧ್ಯಾದಿಗಳೇ ನಮ್ಮ ಮಾತು ಕೇಳುವುದಿಲ್ಲ. ಕುಡಿಯಬಾರದು, ಸೇದಬಾರದು, ಕಳವು ಮಾಡಬಾರದು, ಸುಳ್ಳು ಹೇಳಬಾರದು ಎಂದು ನಮ್ಮ ಬುದ್ಧಿ ಹೇಳಿದರೂ ನಮ್ಮ ಮನಸ್ಸು ಕೇಳುವುದಿಲ್ಲ. ಒಟ್ಟಿನಲ್ಲಿ ಈ ಪ್ರಪಂಚದ ಒಡೆಯನು ಆ ಮಹಾದೇವನೇ ವಿನಾ ನಾವಲ್ಲ.

’ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದರಂತೆ’


ಯಾವುದೇ ಕೆಲಸವನ್ನು ಮಾಡಬೇಕಾದರು ಪೂರ್ಣ ಸಿದ್ಧವಾಗಿ, ತಕ್ಕ ತಯಾರಿ ನಡೆಸಬೇಕು, ಪೂರ್ವ ಸಿದ್ಧತೆ ಇರಬೇಕು, ಆಗಲೆ ಆ ಕೆಲಸ ಯಶಸ್ವಿಯಾಗುವುದು. ಅದು ಬಿಟ್ಟು ಏನೂ ತಯರಿ ಇಲ್ಲದೆ ಮಾಡಲು ಹೊರಟರೆ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ.
ಈ ಮೇಲಿನ ಗಾದೆಯನ್ನು ಮತ್ತೊಂದು ಗಾದೆಯಿಂದ ಸಮರ್ಥಿಸಬಹುದು. ’ಆಗ ಹುಟ್ಟಿ ಆಗ ಬೆಳೆದರಂತೆ’

’ನವಿಲು ಜಾಗರವಾಡ್ತು ಅಂತ; ಕೆಂಬೂತ ಪುಕ್ಕ ತರೆದುಕೊಂಡಿತಂತೆ’

ನವಿಲಿಗೆ ಗರಿಗಳಿವೆ, ಅದು ಜಾಗರವಾಡಿದಾಗ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ನವಿಲನ್ನು ನೋಡಿ ಕೆಂಬೂತ ತಾನೂ ಅದರಂತೆ ಚೆನ್ನಾಗಿ ಕಾಣಬೇಕೆಂದು ಪುಕ್ಕವಾನು ತರಿದು ಕೊಂಡರೆ ಇದ್ದ ಪುಕ್ಕವೂ ಉದುರಿಹೋಗಿ ಮೊದಲಿಗಿಂತ ಅಧ್ವಾನವಾಗಿ ಕಾಣುತ್ತದೆ. ಅದರಂತೆಯೆ ಯಾರೋ ಏನೋ ಮಾಡಿದರು ಎಂದು ತನ್ನ ಯೋಗ್ಯತೆಗೆ ನಿಲುಕದ, ತನ್ನ ಅಳವಿಗೆ ಬರದ ಕೆಲಸವನ್ನು ಮಾಡಬಾರದು ಎಂದಬುದೇ ಇದರ ಸಾರ.

’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’

   ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ಸನ್ನಿವೇಶದ ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು. ಹಾಗೇ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಇರುವವರು, ನಮ್ಮ ನೆಂಟರಿಷ್ಟರು ಹಸನ್ಮುಖರಾಗಿ ಇರುವುದನ್ನು ನೋಡಿ ಅವರಿಗೆ ಯಾವುದೇ ಕಷ್ಟ್ಗಗಳಿಲ್ಲ, ಬರಿ ಸುಖ ಸಂತೋಷಗಳೆ ಎಂದು ಯೋಚಿಸುವುದು ಸರಿಯಲ್ಲ. ಏಕೆಂದರೆ ಅವರಿಗಿರುವ ಕಷ್ಟ ನಮಗೆ ಗೊತ್ತಿರುವುದಿಲ್ಲ.ಆದ್ದರಿಂದ ತನಗೆ ಬಂದ ಕಷ್ಟಗಲನ್ನು ನಗುನಗುತ್ತ ಎದುರಿಸಬೇಕು, ಪ್ರಪಂಚದಲ್ಲಿ ಎಲ್ಲರಿಗು ಕಷ್ಟಬರುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು.ಅದು ಬಿಟ್ಟು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆ
ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಗಾದೆಯಿದೆ- ’ಎಲ್ಲರ ಮನೆಯ ದೋಸೆಯೂ ತೂತೆ’ಯಾರ ಮನೆಯಲ್ಲಿ ದೋಸೆ ಹುಯ್ದರೂ ತೂತು ಇದ್ದೇ ಇರುತ್ತದೆ. ಈ ಮಾತು ನೆನಪಿನಲ್ಲಿ ಇಟ್ಟೂಕೊಂಡರೆ ಜೀವನ ಹಗುರವಾಗುತ್ತದೆ. ಅದುಬಿಟ್ಟು ನನ್ನ ಮನೆಯಲ್ಲಿ ಮಾತ್ರ ಕಷ್ಟ ಬಂದಿದೆ ಎಂದು ಚಿಂತೆ ಮಾಡುತ್ತ ಕುಳಿತಿರುವುದು ತಪ್ಪು.ಕಾವಲಿಯಲ್ಲೇ ತೂತುಬೀಳದಂತೆ ನೋಡಿಕೊಳ್ಳಬೇಕು.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ.

       ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ. ಕನ್ನಡದ ಪ್ರಸಿದ್ಧ ಗಾದೆಮಾತು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಳಸುವ ಮಾತು. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಬಾವಿ ತೊಡುವುದರಿಂದ ಆಗುವ ಪ್ರಯೋಜನ ಶೂನ್ಯ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಗಡ್ಡಕ್ಕೆ ತಗುಲಿರುವ ಬೆಂಕಿ ನಂದಿಸಲು ನೀರಿಗಾಗಿ ಬಾವಿ ತೋಡಲು ಹೊರಟರೆ ಗಡ್ಡ ಉರಿದು ಕ್ರಮೇಣ ಮುಖಕ್ಕೆ ಆವರಿಸುವ ಸಂಭವ ಹೆಚ್ಚು ಆದ್ದರಿಂದ ಯಾವಾಗಲು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುವುದು ಉತ್ತಮ. ಮಾಡುವ ಕೆಲಸವನ್ನು ಮುಂದೂಡುತ್ತಾ ಬಂದಹಾಗೆ ಅದು ನಮ್ಮ ಮುಂದಾಗುವ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗಾದೆಯ ಒಳ ಅರ್ಥ ಸಮಯ ಪ್ರಜ್ಞೆಯ ಪ್ರಾಮುಖ್ಯತೆ.

ಕನಸೇ ಸಾಧನೆಯ ಮೊದಲ ಹಜ್ಜೆ

  "ಕನಸೇ ಸಾಧನೆಯ ಮೊದಲ ಹೆಜ್ಜೆ"

         ಮನೆ ಕಟ್ಟುವ ಮೊದಲು ಮನೆಗೆ ಅಡಿಪಾಯ ಹಾಕುವುದು ಎಷ್ಟು ಮುಖ್ಯವೋ ಸಾಧಿಸುವ ಛಲ ಇರುವವರು ಮೊದಲು ಕನಸು ಕಾಣಬೇಕು ಎನ್ನುತ್ತದೆ ಕನ್ನಡದ ನಾಣ್ಣುಡಿಯೊಂದು. 

              ಮೊದಲು ಕನಸು , ನಂತರ ಗುರಿ , ತದನಂತರ ಪ್ರಯತ್ನ. ಈ ಸೂತ್ರದ ಫಲವೇ ಸಾಧನೆ. 

             ******

                   

ಅಲ್ಪವಿದ್ಯೆ ಮಹಾಗರ್ವಿ

    " ಅಲ್ಪವಿದ್ಯೆ ಮಹಾಗರ್ವಿ "  

  ನಾವು ವಿದ್ಯೆ ಕಲಿತು ವಿದ್ಯಾಂತರಾಗಬೇಕು. ಕಲಿತ ವಿದ್ಯೆ ಪರಿಪೂರ್ಣವಿರಬೇಕು. ನಾಲ್ಕು ದಿನ ತರಗತಿಯಲ್ಲಿ ಕುಳಿತು ನಾನೆಲ್ಲ ಕಲಿತುಬಿಟ್ಟೆ ಎನ್ನುವುದು ಗರ್ವದ ಮಾತಾಗುತ್ತದೆ. ಅದಕ್ಕೆ ಹೇಳುವುದು ಅಲ್ಪ ವಿದ್ಯೆ ಮಹಾಗರ್ವಿ ಎಂದು. ಯಾರೇ ಆಗಲಿ ತಾವು ಕೆಲಸ ಮಾಡುವ ಕ್ಷೇತ್ರವನ್ನು ಕುರಿತಂತೆ ತಕ್ಕಷ್ಟು ಜ್ಞಾನ ಸಂಪಾದಿಸಿಕೊಂಡಿರಬೇಕು. ಅಲ್ಪ ತಿಳುವಳಿಕೆ ಅಪಾಯಕಾರಿ. ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು, ಗೊತ್ತಿಲ್ಲದಿದ್ದರೆ ಬೇರೆಯವರ ಬಳಿ ತಿಳಿದುಕೊಂಡಾದರೂ ಮಾತನಾಡಬೇಕು. ಅಲ್ಲದೆ ಅಲ್ಪವಿದ್ಯೆ ಅಥವಾ ವಿಷಯದ ಬಗ್ಗೆ ಜ್ಞಾನ ಕಡಿಮೆಯಿದ್ದವರು ಮಹಾಜ್ಞಾನಿಯಂತೆ ಬೀಗಲು ಹೋಗಬಾರದು. ಏಕೆಂದರೆ ನಾವೊಂದು ವಿಷಯದ ಕುರಿತು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡುವುದಕ್ಕೂ , ಅಲ್ಪಸ್ವಲ್ಪ ತಿಳಿದು ತನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವುದಕ್ಕೂ ಬಹಳ ವ್ಯತ್ಯಾಸವಿದೆ. ತುಂಬಿದ ಕೊಡ ತುಳುಕುವುದಿಲ್ಲವೆಂಬ ಗಾದೆಮಾತು ಇದಕ್ಕೆ ಪೂರಕವಾಗಿದೆ. ಪೂರ್ತಿ ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೋ ಅಂತೆಯೇ ಪೂರ್ಣಜ್ಞಾನಿಯಾದವನು ಎಲ್ಲವೂ ತನಗೆ ಗೊತ್ತಿದೆ ಎಂದು ಎಲ್ಲೂ ಬೀಗುವುದಿಲ್ಲ. ಅಲ್ಪಸ್ವಲ್ಪ ತಿಳಿದವರು ಮಾತ್ರ ಅಹಂಕಾರದಿಂದ ಬೀಗುತ್ತಾರೆ.

ನಗು

              " ನಗು ಎನ್ನುವ ವಕ್ರ ರೇಖೆಗೆ ಎಲ್ಲವನ್ನೂ ನೇರ ಮಾಡುವ ಶಕ್ತಿ ಇದೆ. 

ಏನಾಗಲಿ ಮುಂದೆ ಸಾಗು ನೀ.

                "ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ." 

         ಎಲ್ಲಾ ದುರಂತಗಳಿಗೂ ಕಾರಣ ಒಂದು ನಮ್ಮ ಮನಸ್ಸು,ಇನ್ನೊಂದು ಆಕಸ್ಮಿಕ. ನಾವು ಸದಾಕಾಲ ಸಕಾರಾತ್ಮಕವಾಗಿ ವಿಚಾರ ಮಾಡುತ್ತ ದಿನಗಳೆದರೆ, ನಮ್ಮ ಸ್ಥಿತ ಪ್ರಜ್ಞೆಯಲ್ಲಿ ನಾವಿದ್ದರೆ, ನಮ್ಮ ಇಂದ್ರಿಯಗಳ ಮೇಲೆ ನಿಗಾ ಇರುವುದೇಯಾದರೆ ನಾವು ಎಲ್ಲಾ ಘಟನೆ,ಸಂಧರ್ಭಗಳನ್ನು ಆತ್ಮವಲೋಕನ ಮಾಡುತ್ತ ಮನೋಲ್ಲಾಸದಿಂದಿರಬಹುದು.    

                 ಮನುಷ್ಯನಿಗೆ ಜೀವನದಲ್ಲಿ "
ಕಳೆದುಕೊಂಡ ಪ್ರೀತಿ,
ಹಸಿದ ಹೊಟ್ಟೆ,
ಖಾಲಿ ಜೇಬು. ಈ ಮೂರು ಅತ್ಯುತ್ತಮವಾದಂತಹ ಪಾಠವನ್ನ ಕಲಿಸುತ್ತವೆ.    

                 ನಾವು ಇಷ್ಟ ಪಡೋರು ನಮ್ಮನ್ನು ಇಷ್ಟ ಪಡಲ್ಲ.
ನಮ್ಮನ್ನು ಇಷ್ಟ ಪಡೋರ್ನ ನಾವು ಇಷ್ಟ ಪಡಲ್ಲ ,ಒಂದು ವೇಳೆ  ನಮಗಿಬ್ಬರಿಗೂ ಇಷ್ಟ ಆದರೆ, ಆ ದೇವರಿಗೆ ಇಷ್ಟ ಆಗಲ್ಲ.ಹೀಗೊಂದು ಮಾತೂ ಇದೆ.ಆದರೆ ಮೊದಲೆರಡು ಸಾಲುಗಳು ನಿಜವಾಗಿವೆ ಆದರೆ ಮೂರನೆಯದು ಮಾತ್ರ ಅನುಭವ ಆಗಿಲ್ಲ.   
                                                                 ಕೊನೆಗೂ, " ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ .

   * ನಾವು ಬಯಸಿದ್ದು ನಮಗೆ ಸಿಗಲಿಲ್ಲವೆಂದಾದರೆ, ಅದರ ಅವಶ್ಯಕತೆ ನಮಗಿಲ್ಲವೆಂದು ತಿಳಿಯಬೇಕು. ಅದರಿಂದ ಹೆಚ್ಚು ಶೋಕ ಪಡುವುದನ್ನು ತಡೆದಂತಾಗುವುದು.

ಹಗಲುಗನಸು

                   ಎಷ್ಟು ಜ್ಞಾನ ತಿಳಿದರೆ ಸಾಕಾಗುವುದು ಈ ಜೀವನಕ್ಕೆ. ಎಲ್ಲವನ್ನೂ ತಿಳಿಯಲು ನಮಗಷ್ಟು ಆಯಸ್ಸು ಇಲ್ಲ. ಚಾಣಕ್ಯ ಅವರು ಅದಕ್ಕೆ ' ಬೇರೆಯವರ ತಪ್ಪುಗಳಿಂದ ಕಲಿ ,ಎಲ್ಲಾ  ತಪ್ಪುಗಳನ್ನು ನೀನೆ  ಮಾಡಿ  ಅನುಭವಿಸುವಷ್ಟು  ಆಯಸ್ಸು ನಿನಗಿಲ್ಲ. ಎಂದು ಹೇಳಿದ್ದಾರೆ.    

                          ಕಾಲೇಜಿಗೆ ಹೋಗುತ್ತಿರುವ ನಾನು, ಓದುವುದು, ಬರೆಯುವುದು, ಜ್ಞಾನ ಸಂಪಾದನೆ ಮಾಡುವುದನ್ನು ಬಿಟ್ಟು ಇನ್ನಿತರೆ ಆಕರ್ಷಣೆ/ವಿಕರ್ಷಣೆಗಳಿಗೆ ಬಲಿಯಾಗುತ್ತಿರವೆನು. ಕಾಲೇಜಿನ ಆರಂಭದ ದಿನದಿಂದಲೇ ಕ್ರಮವಾಗಿ ಪ್ರಾಮಾಣಿಕವಾಗಿ ಓದುತ್ತೀನಿ,ಬರೆಯುತ್ತೀನಿ ಎಂದು ಏನೆಲ್ಲಾ  ಕನಸು ಕಂಡೆ; ಹಾಗೆಯೇ ಆದಷ್ಟು ಪ್ರಯತ್ನವೂ ಪಟ್ಟೆ. ಓದಿ ಓದಿ ಸಾಕಾಯಿತು ನನ್ನ ಓದಿನ ದಾರಿ. ಸ್ವತಂತ್ರವಾಗಿ ಮೋಬೈಲ್ನಲ್ಲಿ  ಬ್ಲಾಗ್ಸ್ ಗಳನ್ನು ತೆರೆದು ಕಥೆ , ಕವನ , ಸುಭಾಷಿತಗಳು, ನುಡಿಮುತ್ತುಗಳು, ಆಚಾರ-ವಿಚಾರಗಳು , ಲಿರಿಕ್ಸ್ಗಳು, ಧರ್ಮಗ್ರಂಥ, ಭಗವದ್ಗೀತೆ , ಕಗ್ಗಗಳು , ಗಾದೆಗಳು, ದಿನಪತ್ರಕೆ , ವಚನಗಳು , ಸಾಹಿತ್ಯಗಳು , ವಿಮರ್ಶೆಗಳು ಮುಂತಾದವುಗಳು ಎಲ್ಲವನ್ನೂ ಓದುತ್ತಿರುವ ನನಗೆ ಕಾಲೇಜಿನಲ್ಲಿ ಕನ್ನಡ ವಿಷಯಯೊಂದನ್ನು ಬಿಟ್ಟು ಬೇರೆ ವಿಷಯಗಳು ಓದಲು ಇಷ್ಟವಾಗುತ್ತಿರಲಿಲ್ಲ.
                   
                    ಕನ್ನಡ,ಇಂಗ್ಲೀಷ್,ಹಿಂದಿ ಓದಲು , ಬರೆಯಲು ಬಂದರೂ ಮನಸ್ಸು ಚಂಚಲತೆಯಿಂದ ಕೂಡಿಕೊಂಡಿರುತ್ತದೆ ವಿದ್ಯಾಭ್ಯಾಸ ಮಾಡೋಣ ಎಂದರೆ ಮನಸ್ಸಾಗುವುದಿಲ್ಲ. ಯಾರ ಜೊತೆಯಾದರು ಮಾತಾಡೋದು ಅಂದರೆ ತುಂಬಾ ಇಷ್ಟ ಸಾಕಾಗುವಷ್ಟು ಮಾತಾಡುತ್ತೇನೆ . ಆದರೆ, ಹೀಗೇ ಕೆಲವು ದಿನಗಳ ಹಿಂದೆ ಗಾದೆಗಳನ್ನ ಓದುವಾಗ " ಮಾತು ಬಂದಾಗ ಸೋತವನೇ ಜಾಣ" ಎಂದಿತ್ತು ಅದನ್ನಳವಡಿಸಿಕೊಂಡೆ ಇತ್ತೀಚಿಗೆ ಮಾತಾಡುವುದನ್ನ ಸ್ವಲ್ಪ ಕಡಿಮೆ ಮಾಡಿದ್ದೀನೆ. ಆದರೆ, ಅವಶ್ಯ ಬಿದ್ದಾಗ ಮಾತ್ರ ಟೀಕೆಗಳಿಗೆ ಹೆದರುವವನಲ್ಲ.

                        " ನಾನು ಕಾಲವನ್ನು ನಂಬುತ್ತೇನೆ ; ಅದರ ಇಚ್ಛೆಯಂತೆಯೇ ನಡೆಯುತ್ತದೆ ಅದರ ವಿರುದ್ಧವಾಗಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದರ ಜೊತೆ ಹೊಂದಾಣಿಕೆಯಾಗಬೇಕಷ್ಟೆ."

      " ತಾನೇ ತಿಳಿದವನೆಂಬ ಗರ್ವ, ಬೇರೆಯವರ ಮಾತಿಗೆ ಕೊಡನವ ಗೌರವ , ಆಧಾರ ರಹಿತ ಗಟ್ಟಿವಾದ ಮಾಡುವವ, ಹೀನ ಶಬ್ದದಿ ನಿಂದಿಸುತ, ನಕಸಿಖಾಂತ ಕೋಪದಲಿ ಮುಳುಗಿದಾತ. ಈ ಐದೂ ಗುಣಗಳನ್ನು ಹೊಂದಿದವನು ಮೂರ್ಖನಾಥ .

ಸಮಯ ಹಾಳು ಮಾಡುವುದು ಬೇಡ.

            "ಸಮಯ ಹಾಳು ಮಾಡುವುದು ಅಂದ್ರೆ ದುಡ್ಡು ಹಾಳು ಮಾಡಿದಂತೆಯೇ ಸರಿ."
     " Time is money "

              ಓಡಿ ಹೋದ ಹುಡುಗಿ ಮತ್ತೆ ಮರಳಿ ಬರಬಹುದು, ಕಳೆದು ಹೋದ ಚಪ್ಪಲಿ ಮತ್ತೆ ಸಿಗಬಹುದು ಆದರೆ, ಕಳೆದು ಹೋದ ಸಮಯ ಯಾವತ್ತೂ ಮರಳಿ ಬರುವುದಿಲ್ಲ.

                       ಇರುವ ಸಮಯದಲ್ಲಿಯೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಹಸನ್ಮುಖರಾಗಿ ಕಾರ್ಯಶೀಲರಾಗಬೇಕು.
"ಮನುಷ್ಯನಿಗೆ ಮೊದಲು ಗುರಿ ಮುಖ್ಯ "
ಒಳ್ಳೆಯ ಗುರಿಯನ್ನು ಆಯ್ಕೆ ಮಾಡಿಕೊಂಡರೆ ಇತರೆ ಅಡೆತಡೆಗಳಿಗೆ ಮುಖ ಮಾಡದೆ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನದ ಕಡೆಗೆ ಮಾತ್ರ ಗಮನವಿರಬೇಕು. ಅದನ್ನೆಲ್ಲ ಬಿಟ್ಟು ವ್ಯರ್ಥ ಕಾಲಹರಣ ಮಾಡುವದು ಮೂರ್ಖತನದ ಲಕ್ಷಣವು ಎದ್ದು ತೋರಿಸುವುದು.

               ಸ್ವಾಮಿ ವಿವೇಕಾನಂದರು ಯಶಸ್ಸಿನ ಬಗ್ಗೆ   " ಸತತ ಪ್ರಯತ್ನ ಮತ್ತು ಧೃಡ ಸಂಕಲ್ಪವಿದ್ದಾಗ ಮಾತ್ರ ಯಶಸ್ಸು ಸಾಧಿಸಬಹುದು" ಎಂದು ಹೇಳುತ್ತಾರೆ. ಸತತವಾಗಿ ಅಂದರೆ ವ್ಯರ್ಥ ಚಟುವಟಿಕೆಗಳಿಗೆ ಸಮಯ ಹಾಳು ಮಾಡಬಾರದು ಅಂತ.

  " ಮಾಡು ಇಲ್ಲವೇ ಮಡಿ "
                             - ಗಾಂಧೀಜಿ
"ಯಾವೊಬ್ಬ ಸಾಧಕನೂ ಅನೇಕ ತಪ್ಪುಗಳನ್ನು ಮಾಡದೆ ಯಶಸ್ಸು ಸಾಧಿಸಲಾರನು."

ಸುಭಾಷಿತ

ವಾದ ಮಾಡಲು ಓದಬೇಡ; ನಂಬಲು ಓದಬೇಡ; ಮಾತನಾಡಲು ಓದಬೇಡ ; ತೂಗಿ ನೋಡಲು ಓದು.
                     - ಫ್ರಾನ್ಸಿಸ್ ಬೇಕನ್

ಮುಕ್ತಿ

ಮುಕ್ತಿ ! ಮುಕ್ತಿ ! ನನ್ನ ನಾನು / ತಿಳಿದುಕೊಳ್ವುದೋ ,
ಸಾವಿಗಂಜಿ ನಿನ್ನಡಿಯಲಿ / ಅಡಗಿಕೊಳ್ವುದೋ ?
               - ಕೆ.ಎಸ್.ನರಸಿಂಹಸ್ವಾಮಿ

ಸರ್ವಜ್ಞ ತ್ರಿಪದಿ

ಗುರುವಿಂದ ಬಂಧುಗಳು ,
ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು ,
ಜಗಕ್ಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ

***-*-***-*-***-*-***-*-***-*-***

ಏ ! ಅಲ್ಪಜ್ಞಾನಿ

°°°°°°°°°°°°°°°°°°°°°°°°°°°°°°°°°°°°
                   ಏ ! ಮೂರ್ಖ ಎಲ್ಲಿದ್ದೀಯೋ ಸಾಕು ನಿನ್ನ ಒಣ ಆಡಂಬರದ ಮಾತುಗಳು ಬಾ ಇಲ್ಲಿ; ಒಂದೊಮ್ಮೆ ನಿನ್ನ ಒಳಗಣ್ಣನ್ನು ತೆರೆದು ಈ ಲೋಕದ ವೈವಿಧ್ಯಮಯ ಚಿತ್ತಾರವನ್ನ ನೋಡಲು ಹಪಹಪಿಸಿ ಓಡಿ ಬಾ. ಸಾಕಿನ್ನು ತಡಮಾಡದೆ ತಟ್ಟು ನಿನ್ನ ಆಂತರ್ಯವನ್ನು. ನನಗೆ ತಿಳಿದಿರುವುದು ದಿವ್ಯ ಜ್ಞಾನವೆಂದು ಇನ್ನೂ ಆ ಭ್ರಮೆಯಲ್ಲಿಯೆ ಮಂಕು ಬುದ್ಧಿಯ ತೋರಿಸಬೇಡ. 'ಜ್ಞಾನವೆಂಬುವುದು ಸಮುದ್ರದಂತೆ ; ಅದರಲ್ಲಿ ನಿನ್ನದು ಇನ್ನೂ ಒಂದು ಹನಿಯಷ್ಟೇ , ನಾನು ಇನ್ನೂ ತಿಳಿದುಕೊಳ್ಳುವ ವಿಷಯಗಳು ತುಂಬಾ ಇವೆ ಎಂದು ಜ್ಞಾನದ ಗುಹೆಯೊಳಗೆ ನುಗ್ಗು. ಸ್ಥಿತ ಪ್ರಜ್ಞೆಯಲ್ಲಿರು; ಸಕರಾತ್ಮಕ ಯೋಚನೆಯಲ್ಲೇ ಕಾಲ ಕಳಿಯಲು ಮುಂದಾಗು........!!!

**********
                 ನಾವು ಏನನ್ನು ಬೇಕಾದರೂ ಸಾಧಿಸಬಹುದು ಆದರೆ ನಮ್ಮ ಆಲೋಚನೆಗಳೇ ನಮ್ಮನ್ನು ಹಾಳು ಮಾಡುತ್ತವೆ.

************
                     ಎಲ್ಲಾದಕ್ಕೂ ಮೂಲ ಕಾರಣ ನಮ್ಮ ಮನಸ್ಸು.

************
                   ಮನಸ್ಸಿದ್ದರೆ ಮಾರ್ಗ.
                  
                  *****